ICAI ಮಾಜಿ ಅಧ್ಯಕ್ಷ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಟಿಎನ್ ಮನೋಹರನ್ ವಿಧಿವಶ

ನವದೆಹಲಿ: ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆಯ (ICAI) ಮಾಜಿ ಅಧ್ಯಕ್ಷ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಟಿ.ಎನ್. ಮನೋಹರನ್ ನಿಧನರಾಗಿದ್ದಾರೆ ಎಂದು ಮಾಜಿ ಸಂಸದ ಸುರೇಶ್ ಪ್ರಭು ಅವರು ಎಕ್ಸ್ ನಲ್ಲಿ ತಿಳಿಸಿದ್ದಾರೆ.

ಅವರ ಪೋಸ್ಟ್ ಹೀಗಿದೆ, “ನನ್ನ ಆತ್ಮೀಯ ಸ್ನೇಹಿತ ಪದ್ಮಶ್ರೀ ಸಿಎ ಟಿ.ಎನ್. ಮನೋಹರನ್ ಅವರ ಹಠಾತ್ ನಿಧನದಿಂದ ತೀವ್ರ ದುಃಖಿತನಾಗಿದ್ದೇನೆ. ಟಿ.ಎನ್. ಮನೋಹರನ್, ಐಸಿಎಐ ಮಾಜಿ ಅಧ್ಯಕ್ಷರು ಮತ್ತು @MahindraRise ಮಂಡಳಿಯ ಗೌರವಾನ್ವಿತ ಸದಸ್ಯರು. ಒಬ್ಬ ವಿಶಿಷ್ಟ ವೃತ್ತಿಪರ ಮತ್ತು ಮಹಾನ್ ಸಮಗ್ರತೆಯ ವ್ಯಕ್ತಿ, ರಾಷ್ಟ್ರ ಮತ್ತು ವೃತ್ತಿಗೆ ಅವರು ನೀಡಿದ ಕೊಡುಗೆಗಳು ಯಾವಾಗಲೂ ಸ್ಮರಣೀಯ. ಅವರ ಕುಟುಂಬಕ್ಕೆ ಹೃತ್ಪೂರ್ವಕ ಸಂತಾಪಗಳು. ಓಂ ಶಾಂತಿ ಎಂದಿದ್ದಾರೆ.